*ಹಾಡು ಹಗಲೇ ಹುಲಿ ದಾಳಿ ಆದಿವಾಸಿ ಯುವಕ ಸಾವು*.
*5೦ ಲಕ್ಷ ಪರಿಹಾರ, ಉದ್ಯೋಗ, ಹುಲಿ ಸೆರೆಗೆ ಆಗ್ರಹ*.
ಕಾಡಂಚಿನ ಗ್ರಾಮಗಳಲ್ಲಿ ಹುಲಿ ಉಪಟಳ ಮುಂದುವರೆದಿದ್ದು, ಮೂರು ತಿಂಗಳ ಹಿಂದೆ ಮದುವೆಯಾಗಿದ್ದ ನವವಿವಾಹಿತ ಆದಿವಾಸಿ ಯುವಕನನ್ನು ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ನಾಗರಹೊಳೆ ಉದ್ಯಾನದಂಚಿನ ಗುರುಪುರ ಗ್ರಾ.ಪಂ.ವ್ಯಾಪ್ತಿಯ ಸೊಳ್ಳೆಪುರದಲ್ಲಿ ಸೋಮವಾರ ಮದ್ಯಾಹ್ನ ನಡೆದಿದೆ.
ಹುಣಸೂರು ತಾಲೂಕಿನ ನಾಗಾಪುರ ಗಿರಿಜನ ಪುರ್ವಸತಿ ಕೇಂದ್ರದ ೫ನೇ ಬ್ಲಾಕ್ನ ಕೃಷ್ಣ-ನಾಗವೇಣಿ ದಂಪತಿಯ ಏಕೈಕ ಪುತ್ರ ಹರೀಶ್(29) ಸಾವನ್ನಪ್ಪಿದಾತ.
ಹರೀಶ ತನ್ನ ತಂದೆಯೊAದಿಗೆ ಎಂದಿನAತೆ ಬೆಳಗ್ಗೆ ತಮ್ಮ ಜಮೀನಿನ ಬಳಿಯ ಅರಣ್ಯ ಪ್ರದೇಶದಲ್ಲಿ ಮೇಕೆ ಮೇಯಿಸಲು ತೆರಳಿದ್ದಾನೆ. ತಂದೆ ಕೃಷ್ಣ ಅರಣ್ಯದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಮೇಕೆ ಮೇಯಿಸುತ್ತಿದ್ದ ಹರೀಶನಿಗೆ ಒಮ್ಮೆಲೆ ಹುಲಿ ದಾಳಿ ನಡೆಸಿದೆ. ಹರೀಶ ಜೋರಾಗಿ ಕಿರುಚಿ ಕೊಳ್ಳುತ್ತಿದ್ದಂತೆ ತಂದೆ ಕೃಷ್ಣ ಗಾಬರಿಯಿಂದ ಓಡೋಡಿ ಬಂದು ಹುಲಿಯನ್ನು ಬೆದರಿಸಿ ಓಡಿಸಿ ಮಗನನ್ನು ಪಾರು ಮಾಡಿದ್ದರಾದರೂ ಅಷ್ಟರೊಳಗೆ ಸಾಕಷ್ಟು ರಕ್ತ ಸ್ರಾವದಿಂದ ಅಸ್ವಸ್ಥಗೊಂಡಿದ್ದ ಮಗನನ್ನು ಅಕ್ಕ ಪಕ್ಕದ ಜಮೀನಿನಲ್ಲಿದ್ದ ಆದಿವಾಸಿಗಳು ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮದ್ಯದಲ್ಲೇ ಸಾವನ್ನಪ್ಪಿದ್ದರು.
ಆಸ್ಪತ್ರೆಗೆ ನಾಗರಹೊಳೆ ಉದ್ಯಾನದ ಮುಖ್ಯಸ್ಥೆ ಪಿ.ಎ.ಸೀಮಾ, ಪ್ರಾದೇಶಿಕ ಅರಣ್ಯ ವಿಭಾಗದ ಡಿ.ಸಿ.ಎಫ್. ಮಹಮ್ಮದ್ ಫಯಾಜುದ್ದೀನ್, ಆರ್.ಎಫ್.ಒ ನಂದಕುಮಾರ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ಧೇಶಕ ಗಂಗಾಧರ್, ವ್ಯವಸ್ಥಾಪಕಿ ಪುಷ್ಟ, ಆಶ್ರಮ ಶಾಲಾ ಮುಖ್ಯಶಿಕ್ಷಕ ಲಕ್ಷö್ಮಣ್ ಭೇಟಿ ನೀಡಿ, ಕುಟುಂಬದವರನ್ನು ಸಂತೈಸಿದರು.
20ಲಕ್ಷ ಪರಿಹಾರ, ಹುಲಿ ಸೆರೆಗೆ ಕಾರ್ಯಚರಣೆ:;
ತಾತ್ಕಾಲಿಕವಾಗಿ ಟೈಗರ್ ಪೌಂಡೇಶನ್ವತಿಯಿAದ ಐದು ಲಕ್ಷರೂ ಪರಿಹಾರದ ಚೆಕ್ ನೀಡಲಾಗುವುದು. ನಂತರ 15ಲಕ್ಷರೂ ಚೆಕ್ ನೀಡಲಾಗುವುದು. ಹುಲಿ ಸೆರೆಗೆ ಎರಡು ಅರಣ್ಯ ವಿಭಾಗಗಳ ಸಿಬ್ಬಂದಿಗಳು ಇಂದಿನಿAದಲೇ ಕೂಂಬಿAಗ್ ನಡೆಸಲು ಆದೇಶಿಸಿರುವುದಾಗಿ ಡಿಸಿಎಫ್ ಸೀಮಾ ಪಿ.ಎ. ತಿಳಿಸಿದ್ದಾರೆ.
ಪೋಷಕರ ಆಕ್ರಂದನ;
ಆಸ್ಪತ್ರೆಯ ಆವರಣದಲ್ಲಿ ಇದ್ದೊಬ್ಬ ಮಗನನ್ನು ಕಳೆದುಕೊಂಡ ತಂದೆ-ತಾಯಿ, ಪತ್ನಿ ರಶ್ಮಿತಾ, ಕುಟುಂಬದವರು ಹಾಗೂ ಆತನ ಸ್ನೇಹಿತರ ಗೋಳು ಹೇಳತೀರದಾಗಿತ್ತು.
ಮೂರು ತಿಂಗಳ ಹಿಂದೆ ಹರೀಶ್ ಮದುವೆ:
ಕಳೆದ ಮೂರು ತಿಂಗಳ ಹಿಂದೆ ಕೊಡಗಿನ ಬಾಳೆಲೆ ಬಳಿಯ ಕುಮಾರಕಟ್ಟೆ ಹಾಡಿಯ ರಶ್ಮಿತಾಳನ್ನು ಹರೀಶ ವಿವಾಹವಾಗಿದ್ದ, ಪತಿಯ ಸಾವಿನಿಂದ ಆಘಾತಕ್ಕೊಳಗಾಗಿದ್ದರು.
ಆದಿವಾಸಿಗಳೇ ಹುಲಿಗೆ ಬಲಿ:
ಈ ಹಿಂದೆ ನಾಗರಹೊಳೆ ಉದ್ಯಾನದಂಚಿನ ಐಯ್ಯನಕೆರೆ ಹಾಡಿ ಗಣೇಶ, ಕೊಳವಿಗೆ ಹಾಡಿಯ ಅಜ್ಜ ರಾಜು, ಇವರ ಮೊಮ್ಮಗ ಚೇತನ್, ಉಡುವೆಪುರದ ಗಣೇಶ್ಗೌಡ, ಹಾಗೂ ನೇರಳಕುಪ್ಪೆ ಬಿ.ಹಾಡಿಯ ವೃದ್ದ ಜಗದೀಶನನ್ನು ಕೊಂದು ಹಾಕಿತ್ತು. ಇದೀಗ ನಾಗಾಪುರ-೫ನೇ ಬ್ಲಾಕ್ನ ಆದಿವಾಸಿ ಯುವಕ ಹರೀಶ ಹುಲಿ ದಾಳಿಗೆ ಬಲಿಯಾಗಿದ್ದಾನೆ. ನೂರಾರು ಜಾನುವಾರುಗಳನ್ನು ಕೊಂದು ಹಾಕಿದೆ.
5೦ ಲಕ್ಷ ಪರಿಹಾರ, ಉದ್ಯೋಗಕ್ಕೆ ಒತ್ತಾಯ:
ಈ ಭಾಗದಲ್ಲಿ ಕಳೆದ ಎರಡು ವರ್ಷಗಳಿಂದ ಹುಲಿ ಓಡಾಡುತ್ತಿದೆ. ಅಲ್ಲದೆ ಹುಣಸೆಕಟ್ಟೆ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಸಾಯಿಸಿತ್ತು. ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಹುಲಿ ಸೆರೆ ಹಿಡಿಯುವಲ್ಲಿ ವಿಫಲವಾಗಿದೆ. ಇದೀಗ ಆಕುಟುಂಬದ ಏಕೈಕ ಆಧಾರ ಸ್ಥಂಭವಾಗಿದ್ದ ಹರೀಶನ್ನು ಬಲಿ ಪಡೆದಿದ್ದು, ಹರೀಶನ ಕುಟುಂಬಕ್ಕೆ 5೦ಲಕ್ಷರೂ ಪರಿಹಾರ ಹಾಗೂ ಕುಟುಂಬಕ್ಕೆ ಉದ್ಯೋಗ ನೀಡುವಂತೆ ಗುರುಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಪ್ರಶಾಂತ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಒತ್ತಾಯಿಸಿದ್ದಾರೆ.